ಜೇನು: ಆಹಾರ-ಔಷಧಿ

ಜೇನು: ಆಹಾರ-ಔಷಧಿ

“ಜೇನು” ಎನ್ನುವ ಪದವೇ ಸರ್‍ವರ ಬಾಯಲ್ಲೂ ನೀರು ತರಿಸುವಂತಹದು. ಜೇನು ನಿಸರ್‍ಗದ ಸಿಹಿಯಾದ ಕೊಡುಗೆ. ಮಕರಂದದ ಸಂಗ್ರಹಿಸಿದ ಹೂವಿನ ಜಾತಿಯನ್ನು ಹೊಂದಿಕೊಂಡು ಜೇನಿಗೆ ಬಗೆಬಗೆಯ ರುಚಿ, ಸುವಾಸನೆ ಮತ್ತು ಬಣ್ಣ ಇರುತ್ತದೆ. ಬಿಳಿ ಬಣ್ಣದಿಂದ ಹಳದಿ ಮತ್ತು ಕಡು ಹಳದಿ ಬಣ್ಣಗಳವರೆಗೆ ಜೇನಿನಲ್ಲಿ ವರ್‍ಣವೈವಿಧ್ಯವುಂಟು. ಜೇನು ಆಹಾರವೂ ಹೌದು, ಔಷಧವೂ ಹೌದು.

ಜೇನು ವೈದ್ಯಕೀಯ ಶಾಸ್ತ್ರದಲ್ಲಿ ಮತ್ತು ಆಯುರ್‍ವೇದ ಪದ್ಧತಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಜೇನು ಹಾಲಿಗಿಂತಲೂ ಆರು ಪಟ್ಟು ಪೌಷ್ಟಿಕತೆ ಹೊಂದಿದೆ. ಬಿಳಿ ಬಣ್ಣದ ಜೇನು ತುಪ್ಪಕ್ಕಿಂದ ಕಂದು ಬಣ್ಣದ ಜೇನಿನಲ್ಲಿ ಪೌಷ್ಟಿಕ ಪ್ರಮಾಣ ಹೆಚ್ಚಾಗಿರುತ್ತದೆ. ಶಕ್ತಿಯನ್ನು ಒದಗಿಸುವಲ್ಲಿ ಜೇನಿಗೇ ಮೊದಲನೆ ಸ್ಥಾನ. ೧೦ ಟೇಬಲ್ ಚಮಚ (೨೦೦ ಗ್ರಾಂ)ದಷ್ಟು ಜೇನು, ೩೩೦ ಗ್ರಾಂ ಮಾಂಸ ಅಥವಾ ೧೦ ಕೋಳಿಮೊಟ್ಟೆ ಅಥವಾ ೮ ಕಿತ್ತಳೆಹಣ್ಣು ಅಥವಾ ೧ ಲೀಟರ್‍ ಹಾಲು ಒದಗಿಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶವನ್ನು ಒದಗಿಸುತ್ತದೆಯೆಂದಾಗ ಅದರ ಶಕ್ತಿಯ ಅರಿವಾಗದಿರದು. ಸುಮಾರು ೨೧ ಗ್ರಾಂ ಜೇನುತುಪ್ಪ ಸುಮಾರು ೬೭ ಕ್ಯಾಲೋರಿಗಳಷ್ಟು ಶಕ್ತಿಯನ್ನು ಒದಗಿಸಬಲ್ಲದು.

ಮುಖ್ಯವಾಗಿ ಜೇನಿನಲ್ಲಿ ಲೆವ್ಯೂಲೋಸ್ ಮತ್ತು ಡೆಕ್ಸ್‌ಟ್ರೋಸ್ ಎಂಬ ಸಕ್ಕರೆಗಳು ಇರುತ್ತವಾದರೂ, ಅದರಲ್ಲಿ ದೇಹಾರೋಗ್ಯಕ್ಕೆ ಅಗತ್ಯವಿರುವ ಹೆಚ್ಚು ಕಡಿಮೆ ಎಲ್ಲಾ ಖನಿಜ-ಲವಣಾಂಶಗಳು ಮತ್ತು ವಿಟಾಮಿನ್‌ಗಳು ಸಾಕಷ್ಟಿವೆ. ಜೇನುತುಪ್ಪದಲ್ಲಿರುವ ಕಬ್ಬಿಣ ಮತ್ತು ತಾಮ್ರದ ಅಂಶಗಳು ನೇರವಾಗಿ ಸಂಪೂರ್‍ಣವಾಗಿ ದೇಹದಲ್ಲಿ ಅರಗಿಕೊಂಡು ಬರುತ್ತವೆ. ಇದರ ಜೊತೆಗೆ ಇತರ ಪದಾರ್‍ಥಗಳು ಕೂಡ ಇದರ ಸಾನಿಧ್ಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಕರಗಿ ಹೆಚ್ಚು ಗುಣಗಳನ್ನು ಶೀಘ್ರವಾಗಿ ಕೊಡುತ್ತವೆ.

ಜೇನಿನಲ್ಲಿ ಬಹು ಸರಳ ರೂಪದ ಸಕ್ಕರೆಯಿರುವುದೇ ಅದರ ಹಿರಿಮೆಗೆ ಕಾರಣ. ಸುಲಭವಾಗಿ ಜೀರ್‍ಣವಾಗುವ ಶಕ್ತಿದಾಯಕವಾದ ಸರಳ ಸಕ್ಕರೆಯಿಂದಾಗಿ ಅಸ್ವಸ್ಥತೆಯಲ್ಲಾಗಲೀ, ಆರೋಗ್ಯದಲ್ಲಾಗಲೀ ಜೇನನ್ನು ನಿರಾತಂಕವಾಗಿ ಎಲ್ಲರೂ ಸೇವಿಸಬಹುದು.

ರೋಗ ನಿವಾರಕ

ಜೇನುತುಪ್ಪ ಪ್ರಬಲ ರೋಗ ನಿರೋಧಕ. ಕೆಂಪು ರಕ್ತಕಣಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇದು ಕೆಮ್ಮು, ಶೀತ ಮತ್ತು ಜ್ವರದ ವಿರುದ್ಧ ತಡೆಯಾಗಿಯೂ ಕೆಲಸ ಮಾಡುತ್ತದೆ. ಇದು ರಕ್ತ ಶುದ್ಧಿಕಾರಿಯಾಗಿಯೂ, ಕಣ್ಣಿನ ವ್ರಣ, ನಾಲಿಗೆ ವ್ರಣ, ಗಂಟಲು ಹುಣ್ಣು ಮತ್ತು ಸುಟ್ಟ ಗಾಯಗಳಿಗೆ ಬಹಳಷ್ಟು ಗುಣಕಾರಿಯಾಗಿದೆ.

ಮುಖದ ಮೇಲೆ ಮೊಡವೆಗಳುಳ್ಳವರು ಸ್ವಲ್ಪ ನಿಂಬೆರಸದೊಡನೆ ಜೇನನ್ನು ಬೆರಸಿ ಹಚ್ಚಿಕೊಳ್ಳುವುದರಿಂದ ಮೊಡವೆಗಳು ಮಾಯವಾಗುವುದಲ್ಲದೆ ಚರ್‍ಮವೂ ಶುದ್ಧಿಯಾಗುತ್ತದೆ.

ದುಡಿತದಿಂದ ತುಂಬಾ ಬಳಲಿದವರು ಒಂದುವರೆ ಟೇಬಲ್ ಚಮಚ ಜೇನನ್ನು, ಚಳಿಗಾಲದಲ್ಲಾದರೆ ೧ ಗ್ಲಾಸ್ ಬಿಸಿ ನೀರಿನಲ್ಲಿ, ಬೇಸಿಗೆಯಲ್ಲಾದರೆ ತಣ್ಣಿರಿನಲ್ಲಿ ಸೇವಿಸಿದರೆ ತನ್ನ ಕಳೆದುಹೋದ ಶಕ್ತಿಯನ್ನು ಪುನಃ ಪಡೆಯುತ್ತಾರೆ.

ಕಂದುಬಣ್ಣದ ಜೇನುತುಪ್ಪದಲ್ಲಿ ಕಬ್ಬಿಣ, ಮ್ಯಾಂಗನೀಸ್ ಮತ್ತು ತಾಮ್ರದ ಪ್ರಮಾಣ ಹೆಚ್ಚಾಗಿರುವುದರಿಂದ ಇದರ ಸೇವನೆಯಿಂದ ಅನಿಮಿಯಾ ರೋಗವು ಕ್ರಮೇಣ ಗುಣ ಹೊಂದುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಕೋಲೆಯೊಳಗಿಂದ
Next post ಸಿಕ್ಕು

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

cheap jordans|wholesale air max|wholesale jordans|wholesale jewelry|wholesale jerseys